ಈ ಚಿತ್ರ ಬಿಡಿಸಿ ಬಣ್ಣ ತುಂಬಿದ್ದು ಎಂಟು ವರುಷದ ಪುಟ್ಟ ಬಾಲಕ ಸಮರ್ಥ್ ಮುತ್ಯಾಲ. ಕರುನಾಡಿನಿಂದ ದೂರ ಬಹುದೂರ ಅಮೇರಿಕಾದಲ್ಲಿ ಬೆಳೆಯುತ್ತಿರುವ ಈ ಬಾಲಕ, ತನ್ನ ಅಮ್ಮನ ಸಹಾಯದಿಂದ ಇದನ್ನು ಬರೆದಿರುವನು. ಹೊರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳು ತಮ್ಮ (ತಮ್ಮ ತಂದೆ ತಾಯಿಯರ) ನಾಡು ನುಡಿ ಬಗ್ಗೆ ಆಸಕ್ತಿಯಿಂದ ಕಲಿತು, ಒಲವು ಬೆಳೆಸಿಕೊಳ್ಳುತ್ತಿರುವುದನ್ನು ನೋಡಿ ಬಹಳ ಖುಷಿ ಆಗುತ್ತದೆ. ಇಂತಹ ಮಕ್ಕಳನ್ನು ಉತ್ತೇಜಿಸುತ್ತಿರುವ ಅವರ ತಂದೆ ತಾಯಿ ಮತ್ತು ಇತರೆ ಪೋಷಕರಿಗೆ ನನ್ನ ನಮನಗಳು. ಹಾಗೆಯೇ ಪುಟ್ಟ ಸಮರ್ಥನಿಗೆ ಶುಭಾಷಯಗಳು !
ಹೊಸಲಿನ ಪೂಜೆ ಮಾಡಿದೆಯಮ್ಮ
ಹಸಿರು ತೋರಣ ಕಟ್ಟಿದೆಯಮ್ಮ
ತುಪ್ಪದ ದೀಪ ಬೆಳಗಿದೆಯಮ್ಮ
ಮಲ್ಲಿಗೆ ಮಾಲೆ ಕಾದಿದೆಯಮ್ಮ
ಕಮಲಾಕ್ಷಿ ಕಮಲಮುಖಿ ಕಮಲೋದ್ಭವೆ ಬಾರೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ನೀನು ಬರುವಾಗ ಹೊನ್ನ ಕಾಲ್ಗೆಜ್ಜೆ ನಾದ ನಾ ಕೇಳುವಂತೆ
ನಿನ್ನ ನಗೆಯಿಂದ ನನ್ನ ಭಾಯವೆಲ್ಲಾ ಓಡಿ ಮರೆಯಾಗುವಂತೆ
ಮನೆಯು ಬೆಳಕಾಗಿ ಮನವು ಬೆಳಕಾಗಿ ಬಾಳು ಬೆಳಕಾಗುವಂತೆ
ದಯಮಾಡಿಸು ನಾರಾಯಣನ ಹೃದಯೇಶ್ವರಿಯೇ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ನಿನ್ನ ಮನೆಯೆಂದು ನಿನ್ನ ಗುಡಿಯೇಮ್ದು ಬಂದು ಸ್ಥಿರವಾಗಿ ನೆಲೆಸು
ಬಂದ ಕ್ಷಣದಿಂದ ತಂದ ಸುಖ-ಶಾಂತಿ ನಮ್ಮ ಬದುಕಲ್ಲಿ ಬೆರೆಸು
ನಿತ್ಯ ಹರಿ ಪೂಜೆ ನಿತ್ಯ ಗುರು ಸೇವೆಯಲ್ಲಿ ನಡೆಯಂತೆ ಹರಸು
ದಯೆ ತೋರಿಸು ಶರಣೆನ್ನುವೆ ಸೌಭಾಗ್ಯದ ನಿಧಿಯೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಸೇವೆಯ ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಸೇವೆಯ ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಚಿತ್ರ : ಪೇಮಾನುಬಂಧ ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಸಿ. ಉದಯ್ ಶಂಕರ್