Friday, July 29, 2011

ಕೈ-ಗುರುತಿನ ಭಾರತ ಬಾವುಟ!!


ಕೈಗಳಿಗೆ ಬಣ್ಣ ಹಚ್ಚಿಕೊಂಡು ಮಾಡಿದ ನಮ್ಮ ಭಾರತದ ಬಾವುಟ ಇದು. ಇದನ್ನ ಮಾಡಿದ್ದು ಹೇಗೆ ಹೆಚ್ಚಿನ ಫೋಟೋಗಳ ಜೊತೆ ವಿವರಗಳು ಇಲ್ಲಿ .  

Monday, July 25, 2011

ಭಾರತದ ಸ್ವಾತಂತ್ರ್ಯೋತ್ಸವ - ಮಕ್ಕಳ ಚಟುವಟಿಕೆಗಳು !

ಭಾರತದ ಸ್ವಾತಂತ್ರ್ಯೋತ್ಸವದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಹಲವು ಚಟುವಟಿಕೆಗಳನ್ನು ಮಾಡಿಸಬಹುದು. ಅಂತರ್ಜಾಲದಲ್ಲಿ ನನಗೆ ಸಿಕ್ಕ ಕೆಲವು ಚಟುವಟಿಕೆಗಳಿವು:




Little Food Junction ನಲ್ಲಿ ಸ್ಮಿತಾ ಅವರು ಮಾಡಿದ ತ್ರಿವರ್ಣ ಊಟ!!


Creative Ideasನ ಪೂಜಾ ಅವರ ಬ್ಲಾಗಿನಲ್ಲಿ ೨೫ಕ್ಕೂ ಹೆಚ್ಚಿನ ತ್ರಿವರ್ಣ ಖಾದ್ಯಗಳು ಉಂಟು!

ಹಾಗೇನೆ ಮಹಾನಂದಿ ಬ್ಲಾಗಿನ ಇಂದಿರಾ ಅವರು ಸ್ವಾತಂತ್ರ್ಯೋತ್ಸವ ಖಾದ್ಯಗಳ ಮೆರವಣಿಗೆಯನ್ನೇ ಮಾಡಿದ್ದಾರೆ !!


ತ್ರಿವರ್ಣ ಬಳೆಗಳು 

ಮಸೂರ್ ಧಾಲ್ , ಅಕ್ಕಿ ಮತ್ತು ಹೆಸರು ಕಾಳು 
 ಮಸೂರ್ ಧಾಲ್ , ಅಕ್ಕಿ, ಹೆಸರು ಕಾಳು  ಮತ್ತು ಲವಂಗದ  ಚಕ್ರ 

'ರೋಗದಿಂದ ಸ್ವಾತಂತ್ರ ' ಎಂಬ ಘೋಷಣೆ  ಇದ್ದ ಈ ಹಣ್ಣು ಮತ್ತು ತರಕಾರಿ ಸಲಾಡ್ ತಟ್ಟೆ ನನ್ನ ಅಚ್ಚುಮೆಚ್ಚು!

 ತ್ರಿವರ್ಣ ಪೇಡ 
 ತ್ರಿವರ್ಣ ಬರ್ಫಿ 
 ತ್ರಿವರ್ಣ ಪಾನೀಯ ಮತ್ತು ಮೊಂಬತ್ತಿ 
 ತ್ರಿವರ್ಣ ಬ್ರೆಡ್ ರೋಲ್  (ketchup and mint chutney)

 ತ್ರಿವರ್ಣ ಅನ್ನ 

ನೀವೂ ಇದೆ ರೀತಿ ನಿಮ್ಮ ಪುಟಾಣಿಗಳ ಜೊತೆ ಯಾವುದಾದರು ತ್ರಿವರ್ಣ ಕಾತುವತಿಕೆ ಮಾಡಿದ್ರೆ ನನ್ನೊಡನೆ ಹಂಚಿಕೊಳ್ಳಿ !

Saturday, July 16, 2011

ಗಾಳಿಪಟ!!!



ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೊಸಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ

ದಾರವ ಜಗ್ಗಿ
ದೂರದ ನಗಿಸುವ ನನ್ನ ಪಟ


Saturday, July 09, 2011

ಕಿ ಕಿ ಕಿ ಕಿ ಎನ್ನುತ ಹಾಡೋಣ..

"ಪುಟಾಣಿ ಏಜೆಂಟ್ ೧ ೨ ೩"  ಚಲನಚಿತ್ರದ ಈ ಹಾಡು ಪುಟ್ಟಿಗೆ ಬಲು ಇಷ್ಟ. ಬಹುತೇಕ ಪೂರ್ತಿ ಹಾಡು ಅವಳಿಗೆ ಕಂಠಪಾಠವೂ ಆಗಿದೆ. ಈ ಹಾಡನ್ನು ಆಗಾಗ್ಗೆ ಕೇಳಿ ಸಿಡಿ ಹಾಕಿಸಿಕೊಂಡು ನೋಡುತ್ತಾಳೆ. ಈ ಚಿತ್ರ ಟಿವಿಯಲ್ಲಿ ಬರುತ್ತಿರುವಾಗ ಅವಳು ನಮ್ಮ ಕ್ಯಾಮೆರಾದಲ್ಲಿ ತೆಗೆದಿರುವ ಕೆಲವು ಚಿತ್ರಗಳಿವು:

ಸಹ್ಯಾದ್ರಿ ಸಾಲಿನಲಿ ಮಲೆನಾಡ ಕಾಡಿನಲಿ ಬೆಳೆದಿತ್ತು ಭಾರಿ ಆಲದ
ಮರವು ಮೊರದಿತ್ತು ನೂರಾರು ಹಕ್ಕಿಗಳ ಸ್ವರವು
ಕಿ ಕಿ ಕಿ ಕಿ ಎನ್ನುತ ಹಾಡೋಣ
ತೂಗಿ ಸಾಗಿ ಎಲ್ಲರು ಹಾರೋಣ
ಸಿಹಿಯಾದ ರುಚಿಯಾದ ಹಣ್ಣಿನ ರಸವ ಹೀರೋಣ
ಕಿ ಕಿ ಕಿ ಕಿ ಎನ್ನುತ ಹಾಡೋಣ
ಕಲಕಲ ಕುಣಿಯೋಣ
ಮೈ ಮನ ಮರೆಯೋಣ
ಒಟ್ಟಿಗೆ ಸಾಗಿ ಮೆತ್ತಗೆ ಹೋಗಿ ಇಂದೆ ಮೆರೆಯೋಣ 
ಕಿ ಕಿ ಕಿ ಕಿ ಎನ್ನುತ ಹಾಡೋಣ
ತೂಗಿ ಬಾಗಿ ಎಲ್ಲರು ಹಾಡೋಣ
ಎಲ್ಲರು ಹಾಡೋಣ
ಎಲ್ಲರು ಹಾಡೋಣ
ಕಂದ ನೀ ಬಲಿಯಾದೆಯ ತಂದೆ ತಾಯಿಯ ತೊರೆದೆಯ
ಕಾಡಿತೆ ವಿಷವು ತೀರಿತೆ ಋಣವು
ಕಾಳ ಸರ್ಪದ ಕಾಗು ತಾಳಾಲಾರ ನೋವು
ಇದಕೆ ಕೊನೆ ಇಲ್ಲವೆ
ಯಾರು ಗತಿ ಇಲ್ಲವೆ
ಇಲ್ಲವೆ
ಇಲ್ಲವೆ
ಕಂದ ನೀ ಬಲಿಯಾದೆಯ ತಂದೆ ತಾಯಿಯ ತೊರೆದೆಯ
ಅಗಲಿ ಇರಲಾರೆ ನಾ ಅಗಲಿ ಇರಲಾರೆ ಇರಲಾರೆ
ಏನಾಯ್ತು ಹೇಗಾಯ್ತು ಯಾರಿಂದ ಹೇಳಿ ಹೇಳಿ
ಅಳಬೇಡಿ ಹೆದರಬೇಡಿ ಈ ನರಿ ಮಾತು ಕೇಳಿ
ಅಪಾಯ ಬಂದಾಗ ಉಪಾಯ ಹೇಳ್ತೀನಿ
ಆ ಸರ್ಪಾನೆ ಸಾಯೊ ಹಾಗ್ ಮಾಡ್ತೀನಿ
ಬನ್ನಿ ಎಲ್ಲ ಬನ್ನಿ
ಏ ಪಕ್ಷಿ ರಾಜ ಬಾನ ತೇಜ ಬಾ ಬಾ
ಆಹಾ ಆಹಾ ಏನು ರೋಷ ಏನೋ ಆವೇಶ ಎಲ್ಲ ನಮ್ಮಂಥ ಬಡ ಪ್ರಾಣಿಗಳ ಮೇಲೇನೆ ನಿನ್ನ ಪೌರುಷ
ಸಾಕು ಸಾಕು ಬರಿ ಒಣ ಜಂಬದಿಂದ ಏನು ಪ್ರಯೋಜನವಿಲ್ಲ
ವೃತ ಕೋಪ ತಾಪ ಪ್ರತಾಪ ಏನು ಸುಖವಿಲ್ಲ
ನಮ್ಮ ಸರ್ಪ ರಾಜನ ಮುಂದೆ ನಿನ್ನ ದರ್ಪ ಏನು ನಡೆಯೊಲ್ಲ
ತಾಳು ತಾಳು ನಿನ್ನ ಪೌರುಷ ಆವೇಶ ರೋಷ ಅಲ್ಲಿ ತೊರ್ಸು ಬಾ
ಅಪಾಯ ಬಂದಾಗ ಉಪಾಯದಿಂದ ಕಾರ್ಯ ಸಾಧಿಸಬೇಕು
ವೈರಿ ಎದುರಾದಾಗ ಧೈರ್ಯ ತೋರಿ ಛಲದಿಂದ ಗೆಲ್ಲಬೇಕು
ಕಿ ಕಿ ಕಿ ಕಿ ಎನುತ ಹಾಡೋಣ
ತೂಗಿ ಬಾಗಿ ಎಲ್ಲರು ಹಾಡೋಣ
ಎಲ್ಲರು ಹಾಡೋಣ
ಎಲ್ಲರು ಹಾಡೋಣ



Putti loves this song from the 1979 kannada movie 'Putani Agent 123" . The photos are taken by her with our Canon S3IS while the song is being played on TV. That reminds I need to share some of the photographs she has taken.